ಲಕ್ಷ್ಮಿ ನರಸಿಂಹ ಸ್ತೋತ್ರ

ಲಕ್ಷ್ಮಿ ನರಸಿಂಹ ಸ್ತೋತ್ರ

ಸಂಸ್ಕೃತ ಮೂಲ: ಆದಿ ಶಂಕರ
ಕನ್ನಡಕ್ಕೆ  : ವಿಶ್ವೇಶ್ವರ ದೀಕ್ಷಿತ

ನರ್ತನ: ಮಾಲತಿ ಅಯ್ಯಂಗಾರ್
ಮತ್ತು ಕಲಾವಿದರು 

 

ಗಾಯನ: ಕಲಾನಿಧಿ ವಿದ್ವಾನ್‌
ಶ್ರೀ ಆರ್.ಕೆ. ಶ್ರೀಕಂಠನ್  

 

ಪೂರ್ಣ ವಾಚನ

 

ಹಾಲ್ ಕಡಲ ನೆಲೆಯವನೆ, ಚಕ್ರವನು ಹಿಡಿದವನೆ, 
   ಹಾವುರಾಯನ ಹೆಡೆಯ ಮಣಿ ತೊಟ್ಟ ಚೆನ್ನಿಗನೆ, 
ಯೋಗಿಗಳ ಎರೆಯ, ಚಿರ, ಜಗ ದಾಂಟಿಸುವ ನಾವೆ,
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧]

ರವಿ, ಬೊಮ್ಮ, ಸುರರರಸು, ಮರುತಾದಿಗಳಗಣಿತ 
   ಮುಡಿಯೊಡವೆಗಳೊತ್ತಿದ ಅಡಿಕಮಲಗಳ ಹೊಳಪ,
ಲಕುಮಿ ಮೊಲೆಕಮಲಗಳ ಬಳಿ ಸುಳಿವ ಅರಸಂಚೆ,
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೨]

ಕೈ ಒಂದರೊಳು ಚಕ್ರ, ಇನ್ನೊಂದರೊಳು ಶಂಖ, 
   ಕಡಲಣುಗಿ ನಡು ಬಳಸಿ ಎಡಗಡೆಯ ಮತ್ತೊಂದು, 
ಅಳುಕಳಿವ ವರ ಈವ ಕಮಲಾಂಕ ಬಲ ಕೈಯ 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೩]

ಬಾಳ್ ಕಾಡ ದಟ್ಟದಲಿ ಅಲೆದಾಡುತಿರೆ ನಾನು 
   ಬಯಕೆ ಮೊಗ ಕೂರ ಮಿಗ ಕಾಡುತಿದೆ ಬೆಂಬತ್ತಿ; 
ಕುಸಿದಿರುವೆ, ಸುಡುತಿರಲು ಹೊಟ್ಟೆಯುರಿ ಬಿಸುಗಾಲ; 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೪]

ಮಾಯೆ ಮದ್ದಾನೆ ಗುದ್ದಿರೆ ಸೊಂಡಿಲಿಂದೆನ್ನ
   ಬಿದ್ದಿರುವೆ ನಾನಿಲ್ಲಿ ಕೈ ಕಾಲು ಮೈ ಮುರಿದು, 
ಸಾವ್ ಇರವುಗಳಿಗೆ ಅಳುಕುತ; ಅಳಲನಳಿವವನೆ,
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.      [೫]
 
ಬಾಳ ಕಾಳ್‌ಕಿಚ್ಚಿನಲಿ ಬಳಲಿರುವೆ ನಾ ಬೆಂದು; 
   ಈ ಉರಿವ ಬೆಂಕಿಯಲಿ ಸುಟ್ಟಿರಲು ಮೈ ನವಿರು 
ನಿನ್ನ ಅಡಿ ತಾವರೆಯ ಕೊಳದಿ ತಣಿಯಲು ಬಂದೆ; 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೬]

ಕಳ್ಳರೀ ಕರಣಗಳು ಮುತ್ತಿಕ್ಕಿ ನನ್ನನ್ನು,  
   ಕದ್ದು ಮಾಸಿರಿ ಬುದ್ಧಿ ಕುರುಡನಾಗಿಸಿ ನನ್ನ, 
ದೂಕಿಹರು ಕಾರ್‌ಮರುಳ ಆಳ ಬಾವಿಯ ತಳಕೆ; 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೭]

ಬಾಳ ಬಾವಿಯ ಆಳ ಅಳುಕು ತಳ ನಾ ಮುಟ್ಟೆ 
   ಕುಟುಕುತಿವೆ ನನ್ನನ್ನು ಅಳಲಿನಹಿಗಳು ನೂರು; 
ದೆಸೆ ಇರದ ದೀನ, ನಾ, ಕಡು ಬಡವ, ಬಡಪಾಯಿ; 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.    [೮] 

ಬಾಳ್ ಉರಗ ಬಾಯ್ ತೆರೆದು ಹೆದರಿಸುವ ಹಲ್‌ಗಳಲಿ 
   ತುಂಬಿರುವ ಕಡು ನಂಜು ಸುಡುತಿಹುದು ನನ್ನನ್ನು;
ಹಾವು-ಹಗೆ-ವಾಹನನೆ, ಇಂಗಡಲ ನೆಲೆಯವನೆ,
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.    [೯] 

ಬಾಳ ಕಡಲಿನಲಿ ಕಡೆಯುತ್ತಿರುವ ಮಾಕಾಲ
   ಮೊಸಳೆಗಡಣವು ಹಿಡಿದು ನನ್ನೊಡಲನೊಡೆದಿಹುದು; 
ರುಚಿ ಬಯಕೆಗಳಲೆಗಳು ಕೆಡುಹುತಿವೆ ಬಡಿಬಡಿದು ;
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧೦]

ಬಾಳ ಬಲೆಯಲಿ ಬಿದ್ದ ಮರುಳ ಮೀನವು ನಾನು; 
   ವಿಷಯಗಳ ಮೀನ್‌ಕೊಕ್ಕೆಗಳು ಚುಚ್ಚಿ ಚುಚ್ಚಿ 
ಗಾಸಿಗೊಂಡಿಹವು ತಲೆ ಬಾಯಿಗಳು; ಜಗಕೆ ನೆಲೆ, 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧೧]

ಕೆಡಕು ಬೀಜದಿ ಬೆಳೆವ, ಗೆಯ್ಮೆಗಳ ರೆಂಬೆಗಳ,
   ಕರಣಗಳೆಲೆ, ಬಯಕೆ ಹೂಗಳ ಬಾಳ ಹೆಮ್ಮರದ 
ಅಳಲವಣ್ ತಿನಲೇರಿ, ಬೀಳುತಿಹೆ ನಾ ಕೆಳಗೆ,
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧೨]

ಈ ಜಗದ ಸೆಳೆತಗಳು ನನ್ನನ್ನು ಹೊಸೆದಿರಲು 
   ಎಳೆಯುವರು ಯಮಭಟರು ಬಿಗಿದು ಕೊರಳಿಗೆ ಉರುಲು; 
ಪರವಶನು ನಾ ಒಂಟಿ; ಅಳುಕಿರುವೆ; ಕರುಣಾಳು, 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧೩]

ಸಿರಿಯರಸ, ಸುರರರಸ, ಒಂದಿಸುವ, ನಿಡುನಡೆಯ, 
   ಕಮಲನಾಭ, ಮಧುಗೊಲಿ, ಕಮಲಕಣ್ಣಿಗ, ಕೃಷ್ಣ, 
ವಾಸುದೇವ, ಜನಾರ್ದನ, ಕೇಶವ, ಬ್ರಹ್ಮಣ್ಯ, 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧೪]

ಬಾಳ್ ಕಡಲಿನಲಿ ಮುಳುಗಿ ನಾ ಮರುಳುಗೊಂಡಿರುವೆ; 
   ಹೀನನೆಡೆ ಕಣ್‌ಬೀರು, ಕರುಣೆಗಡಲಿನ ಎರೆಯ; 
ಪ್ರಹ್ಲಾದನಳಲು ನೀ ನೀಗಿಸಲು ಬಂದಂತೆ, 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.    [೧೫] 

ಪ್ರಹ್ಲಾದ ಪರಾಶರ ಪುಂಡರೀಕ ನಾರದ 
   ವ್ಯಾಸಾದಿ ವರ ಭಾಗವತರ ಎದೆಯೊಳು ನೆಲೆತ, 
ಭಕುತರನು ಕಾಪಿಡುವ ಪಾರಿಜಾತದ ಮರವೆ, 
   ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು.     [೧೬]

ಲಕುಮಿ ನರಸಿಂಹನಡಿ ಕಮಲಗಳ ಬಂಡುಣುತ 
   ಶಂನುಡಿಯನಿದನಿಲ್ಲಿ ಉಸುರಿದನು ಶಂಕರನು; 
ಹರಿ ಭಕುತಿಯಿಂದ ಮನನಿಸಲು ಮನುಜನು ಇದನು 
   ಹೊಂದುವನು ಆ ಕಮಲ ಅಡಿಗಳ ಇಡಿ ನೆಲೆಯನು.     [೧೭]


ಸಂಸ್ಕೃತ ಮೂಲ: ಆದಿ ಶಂಕರ

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
   ಭೋಗೀಂದ್ರಭೋಗಮಣಿರಂಜಿತ ಪುಣ್ಯಮೂರ್ತೇ 
ಯೋಗೀಶ ಶಾಶ್ವತ ಶರಣ್ಯಭವಾಬ್ಧಿಪೋತ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೧]
 
ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ -
   ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ 
ಲಕ್ಷ್ಮೀಲಸತ್ಕುಚಸರೋರುಹರಾಜಹಂಸ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೨]

ಏಕೇನ ಚಕ್ರಮಪರೇಣ ಕರೇಣ ಶಂಖಮ್-
   ಅನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್ 
ವಾಮೇತರೇಣ ವರದಾಭಯಪದ್ಮಚಿಹ್ನಂ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೩]

ಸಂಸಾರಘೋರಗಹನೇ ಚರತೋ ಮುರಾರೇ
   ಮಾರೋಗ್ರಭೀಕರಮೃಗಪ್ರವರಾರ್ದಿತಸ್ಯ 
ಆರ್ತಸ್ಯ ಮತ್ಸರನಿದಾಘನಿಪೀಡಿತಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೪]

ಸಂಸಾರಭೀಕರಕರೀಂದ್ರಕರಾಭಿಘಾತ -
   ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ 
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೫]

ಸಂಸಾರದಾವದಹನಾತುರಭೀಕರೋರು-
   ಜ್ವಾಲಾವಲೀಭಿರತಿದಗ್ಧತನೂರುಹಸ್ಯ 
ತ್ವತ್ಪಾದಪದ್ಮಸರಸೀಂ ಶರಣಾಗತಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೬]

ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ
   ಚೋರೈರ್ಮಹಾ ಬಲಿಭಿರಿಂದ್ರಿಯನಾಮಧೇಯೈಃ 
ಮೋಹಾಂಧಕೂಪಕುಹರೇ ವಿನಿಪಾತಿತಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೭]

ಸಂಸಾರಕೂಪಮತಿಘೋರಮಗಾಧಮೂಲಂ
   ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ 
ದೀನಸ್ಯ ದೇವ ಕೃಪಣಾಪದಮಾಗತಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೮]

ಸಂಸಾರಸರ್ಪಘನವಕ್ತ್ರಭಯೋಗ್ರತೀವ್ರ-
   ದಂಷ್ಟ್ರಾಕರಾಲವಿಷದಗ್ಧವಿನಷ್ಟಮೂರ್ತೇಃ 
ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೯]

ಸಂಸಾರಸಾಗರವಿಶಾಲಕರಾಲಕಾಲ-
   ನಕ್ರಗ್ರಹಗ್ರಸನನಿಗ್ರಹವಿಗ್ರಹಸ್ಯ 
ವ್ಯಗ್ರಸ್ಯ ರಾಗರಸನೋರ್ಮಿನಿಪೀಡಿತಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೧೦]

ಸಂಸಾರಜಾಲಪತಿತಸ್ಯ ಜಗನ್ನಿವಾಸ
   ಸರ್ವೇಂದ್ರಿಯಾರ್ಥವಡಿಶಾಗ್ರಝಷೋಪಮಸ್ಯ 
ಪ್ರೋತ್ಖಂಡಿತ ಪ್ರಚುರ ತಾಲುಕಮಸ್ತಕಸ್ಯ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೧೧]

ಸಂಸಾರವೃಕ್ಷಮಘಬೀಜಮನಂತಕರ್ಮ-
   ಶಾಖಾಶತಂ ಕರಣಪತ್ರಮನಂಗಪುಷ್ಪಮ್ 
ಆರುಹ್ಯ ದುಃಖಫಲಿತಂ ಪತತೋ ದಯಾಲೋ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೧೨]

ಬದ್ಧ್ವಾ ಗಲೇ ಯಮಭಟಾ ಬಹುತರ್ಜಯಂತಃ
   ಕರ್ಷಂತಿ ಯತ್ರ ಭವಪಾಶಶತೈರ್ಯುತಂ ಮಾಂ 
ಏಕಾಕಿನಂ ಪರವಶಂ ಚಕಿತಂ ದಯಾಲೋ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೧೩]

ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
   ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ 
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ    [೧೪]

ಸಂಸಾರಸಾಗರನಿಮಜ್ಜನಮುಹ್ಯಮಾನಂ
   ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಂ 
ಪ್ರಹ್ಲಾದಖೇದಪರಿಹಾರಪರಾವತಾರ
  ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ     [೧೫]

ಪ್ರಹ್ಲಾದನಾರದಪರಾಶರಪುಂಡರೀಕ-
   ವ್ಯಾಸಾದಿ ಭಾಗವತಪುಂಗವಹೃನ್ನಿವಾಸ 
ಭಕ್ತಾನುರಕ್ತಪರಿಪಾಲನಪಾರಿಜಾತ
   ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ     [೧೬]

ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
   ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ 
ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾಃ
   ತೇ ಯಾಂತಿ ತತ್ಪದಸರೋಜಮಖಂಡರೂಪಂ    [೧೭] 
 


ತಾಗುಲಿ : Shankara, Lakshmi, Narasimha, Vishweshwar Dixit